Ficool

Chapter 7 - sri vijayadasaru 11

ಶ್ರೀ ವಿಜಯದಾಸರ ಸುಳಾದಿ: ಸತ್ಸಭೆಗೆ ನಮಿಸುವೆ

ಶ್ರೀ ತ್ರಿವಿಕ್ರಮಾಯ ನಮಃ

ರಾಗ - : ತಾಳ -

ಶರಣು ಶರಣು ಸುರಾರಿ ಭಂಜನ

ಶರಣು ತ್ರಿಭುವನ ರಂಜನ

ಶರಣು ಸೇವಿತ ಸಕಲ ಮುನಿಜನ

ಶರಣು ರವಿಕುಲವರ್ಧನ ಶರಣು ll ಪ ll

ಹರಿಮುಕುಂದ ಮುರಾರಿ ಶ್ರೀಧರ ಆದಿಪುರುಷ ರಮಾವರ

ಪರಮಭಕ್ತ ಸರೋಜ ಭಾಸ್ಕರ ಪಾಹಿ ಪಾಹಿ ಕೃಪಾಕರ ll 1 ll

ತರುಣಿ ದ್ರೌಪದಿ ಮಾನ ರಕ್ಷಕ ದಾಸ ಜನ ಪರಿಪಾಲಕ

ದುರುಳ ದನುಜಾರಣ್ಯ ಪಾವಕ ದುರಿತಹರ ರಘುನಾಯಕ ll 2 ll

ಕೇಶವಾಚ್ಯುತ ಕೃಷ್ಣವಾಮನ ವಾಸುದೇವ ಜನಾರ್ದನ

ವಾಸವನುತ ವನಜಲೋಚನ ವಂದಿತಾಖಿಲ ಬುಧಜನ ll 3 ll

ಬ್ರಹ್ಮರುದ್ರೇಂದ್ರಾದಿ ಪೂಜಿತ ಬ್ರಹ್ಮಋಷಿಗಣ ಭಾವಿತ

ಬ್ರಹ್ಮಪಿತ ಪ್ರಹ್ಲಾದವರದ ನೃಸಿಂಹದೇವ ನಮೋಸ್ತುತೇ ll 4 ll

ಎನುತ ಭಜಿಸುವ ಭಕ್ತ ಜನರಿಗೆ ಮನದಭೀಷ್ಟವ ಪಾಲಿಪ

ಜನವರನೆ ಗುರುರಾಮವಿಟ್ಠಲ ಜಾನಕೀ ಪ್ರಾಣವಲ್ಲಭ ll 5 ll

ರಾಗ - : ತಾಳ -

ಅಂಗಳದೊಳು ರಾಮನಾಡಿದ ಚಂದ್ರ

ಬೇಕೆಂದು ತಾ ಹಠ ಮಾಡಿದ ॥ಪ॥

ತಾಯಿಯ ಕರೆದು ಕೈ ಮಾಡಿ ತೋರಿದ

ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ

ಚಿನ್ನಿಕೊಳು ಚಂಡು ಬುಗುರಿ ಎಲ್ಲವ

ಬೇಡ ಬೇಡ ಎಂದು ತಾ ಬಿಸಾಡಿದ ॥1॥

ಕಂದ ಬಾ ಎಂದು ತಾಯಿ ಕರೆದಳು ಮಮ್ಮು

ಉಣ್ಣೆಂದು ಬಣ್ಣಿಸುತ್ತಿದ್ದಳು

ತಾಯಿ ಕೌಸಲ್ಯ ಕಳವಳ ಗೊಂಡಳು ಕಂದ

ಅಂಜಿದನು ಎನ್ನುತಿದ್ದಳು ॥ 2 ॥

ಅಳುವ ಧ್ವನಿ ಕೇಳಿ ರಾಜನು ಮಂತ್ರಿ

ಸಹಿತಾಗಿ ಧಾವಿಸಿ ಬಂದನು

ನಿಲುವ ಕನ್ನಡಿ ತಂದಿರಿಸಿದ

ಶ್ರೀ ರಾಮನ ಎತ್ತಿ ಮುದ್ದಾಡಿದ ॥ 3॥

ಕನ್ನಡಿಯೊಳು ಬಿಂಬ ನೋಡಿದ ಚಂದ್ರ

ಸಿಕ್ಕಿದನೆಂದು ಕುಣಿದಾಡಿದ

ಈ ಸಂಭ್ರಮ ನೋಡಿ ಆದಿ ಕೇಶವ

ರಘು ವಂಶವನ್ನೇ ಕೊಂಡಾಡಿದ ॥ 4 ॥

ರಾಗ - : ತಾಳ -

ಉದ್ಧರಿಸೊ ಮಹಾರಾಯ ಮಧ್ವಾಂತರ್ಗತ l

ಉದ್ಧವ ಪ್ರಿಯ ll ಪ ll

ಬಿದ್ದಿಹೆ ಸಂಸಾರಾಬ್ಧಿಯೊಳಗೆ ತಾನೆದ್ದೆನೆಂದರೆ l

ಪದ್ಧತಿ ಕಾಣೆನ್ನುದ್ಧರಿಸೊ ಮಹರಾಯ ll 1 ll

ಇದ್ಧರಿಯೊಳಗೆ ಪುಟ್ಟಿದದಕಿನ್ನು ಮಧ್ವಶಾಸ್ತ್ರದಲಿ l

ಕೊಟ್ಟೆನ್ನುದ್ಧರಿಸೊ ಮಹರಾಯ ll 2 ll

ಕರ್ಮಕಾಲ ಫಲ ಊರ್ಮಿಯೊಳಗೆ ನಾ ನಿರ್ಮಲಕಾಣೆನೊ l

ಶರ್ಮವೆ ಕೊಟ್ಟೆನ್ನುದ್ಧರಿಸೊ ಮಹರಾಯ ll 3 ll

ಚಿನ್ನನ ಬಿನ್ನಪ ಮನಕೆ ತಂದು ಬನ್ನ ತರಿಪ ಪಥ l

ವನ್ನು ತೋರಿಸೆನ್ನನುದ್ಧರಿಸೊ ll 4 ll

ದಾಸನ ಬಿನ್ನಪ ಏಸು ಎನ್ನದೇ ತಂದೆವಾಸುದೇವ ಪೊರಿ l

ಈ ಸಮಯದಿ ಎನ್ನನುದ್ಧರಿಸೊ ll 5 ll

ರಾಗ - : ತಾಳ -

ನರಸಿಂಹ ನರಸಿಂಹ ನಮಿಸುವೆನೊ ಘೋರ

ದುರಿತ ಬೆನ್ನ ಬಿದ್ದಿದೆ ಪರಿಹರಿಸೊ ಶ್ರೀ ನರಸಿಂಹ ll ಪ ll

ಪರಮೇಷ್ಠಿ ಹರ ಸುರಪತಿ ಮುಖರಾ l

ಸುರನಿಕರ ಪೊರೆವ ಪ್ರಭೋ ಪ್ರವರ l

ದುರಿತವು ಅವರನ್ನ ಬಾಧಿಸದಂತೆ l

ಪೊರೆದ ಪರಿಯಿಂದ ಎನ್ನ ಪೊರೆಯೊ ll 1 ll

ಕಾಯ್ದು ತನ್ನಯ ತನ್ನ ತಂದೆಯ ಬಾಧೆ l

ಭಯದಿಂದ ಮನದಲ್ಲಿ ನಿನ್ನ ನೆನೆಯೆ l

ದಯದಿಂದ ನೀ ಕಂಭದಲಿ ಬಂದು ಪೊರೆದಂತೆ ಎನ್ನ l

ಭಯ ಪರಿಯೆ ಶ್ರೀ ನರಸಿಂಹ ll 2 ll

ನಿನ್ನ ಪೆಸರೆಂದರೆ ದುರಿತಂಗಳು l

ತನ್ನಿಂದ ತಾನೆ ಜರಿಯುವವು l

ಚನ್ನಾಗಿ ಶರಣರ ಪೊರೆದದಕೆ l

ನಿನ್ನವರೆಂದು ಕೇಳಿ ಬಲ್ಲೆ ಶ್ರೀ ನರಸಿಂಹ ll 3 ll

ನಖ ಮುಖ ಶಿಖಿ ತನ್ನ ನೆನಿಯೆ l

ಸುಖಿತರವಾಹೋದು ಶರಣರಿಗೆ l

ಮಖಭುಜ ರವಿ ಸಾಕ್ಷಿ ಇದಕಾಗಿದೆ ವಿಖನಸಾರ್ಚಿತಪಾದ l

ಸುಖಮಯನೆ ಶ್ರೀ ನರಸಿಂಹ ಕಾಯೊ ll 4 ll

ಅರಿದರೀಧರ ವರ ಕರಯುಗನೆ l

ಕರಯುಗ ಜಾನು ಶಿಖರದಲ್ಲಿಪ್ಪನೆ l

ಶಿರದಿಂದೊಪ್ಪುವ ಕರತಳನೆ l

ವರ ವಾಸುದೇವವಿಟ್ಠಲ ಪೊರೆಯೊ ಶ್ರೀ ನರಸಿಂಹ ಕಾಯೊ ll 5 ll

ರಾಗ - : ತಾಳ -

ಕರುಣಿಸು ನರಹರಿಯೇ ಸ್ಮರಣಿಯ

ಕರುಣಿಸು ನರಹರಿಯೇ ll ಪ ll

ಕರುಣಿಸುವದು ತವಸ್ಮರಣೆ ನಿರಂತರ

ಧರಣಿ ಸುರಪ್ರಿಯ ಚರಣಕೆರಗುವೆನು ll ಅ ಪ ll

ಶರಣರ ಸುರತರುವೇ ಕರುಣಾ

ಶರಧಿ ಶಿರಿಯಧೊರೆಯೆ

ಸರಸಿಜ ಭವಮುಖರರಸನೆ ತವಪದ

ಸರಸಿಜದಲಿ ಮನವಿರಿಸುವಂತೆ ಜವ ll 1 ll

ಕಂದನನುಡಿಕೇಳಿ ಸ್ತಂಭದಿ

ಬಂದೆಯೊ ವೇಗದಲಿ

ವಂದಿಸುವೆನು ಭವಬಂಧ ಬಿಡಿಸಿ ಮನ

ಮಂದಿರದಲಿ ತವ ಸಂದರುಶನವನು ll 2 ll

ಚಾರು ಕೃಷ್ಣ ತೀರಾಕಾರ್ಪರಾ

ಗಾರನೆ ಸ್ಮರಿಸುವರ

ಘೋರದುರಿತ ಹರನಾರಸಿಂಹ ನಿ

ನ್ನಾರಾಧಕರೊಳು ಸೇರಿ ಸುಖಿಸುವಂತೆ ll 3 ll

ನಿನ್ನವನೊ ನಿನ್ನವನೊ ನೀರಜಾಕ್ಷಾ l

ಅನ್ಯರಿಗೆ ಅಲ್ಪರಿಯೇ ಅನಿಮಿತ್ತ ಬಂಧೂ ll ಪ ll

ವಿಜಯರಾಯರ ಪಾದ ನಿಜವಾಗಿ ನೆರೆನಂಬಿ l

ಮೂಜ್ಜಗದೊಳಗೆ ಮುರಾರಿ ನಿನ್ನ l

ವ್ಯಾಜವಿಲ್ಲದ ರಾಜ ಪದವಿ ಸೇರಿಸುವ ಶಿರಿ l

ರಾಜಾಧಿರಾಜ ಹೇ ರಾಜಾನಂತನಿಭನೆ ll 1 ll

ಅರೆಮರೆಯಾಗೊಳದಂತೆ ಆಚರಿಪದೆ ಇಂದು l

ವರಿಸಿ ಬೇಡಿದೆ ವರವ ಪರಿಪರಿಯಲಿ l

ಪರಿಪೂರ್ಣ ಜ್ಞಾನಿಯೇ ಪರಸುಖವ ಪೂರ್ತಿಸುವ l

ಶರಣ ಜನ ಮನೋಹಾರ ಶ್ರೀ ಗುರುಗತ ಸ್ವಾಮೀ ll 2 ll

ಕೀರ್ತಿವಂತನೆ ಎನ್ನ ಮಾತು ಮನ್ನಿಸಬೇಕೋ l

ಆರ್ತಿ ಸಜ್ಜನರಿಗೆ ಬರಲು ವಳಿತೇ l

ಪಾರ್ಥಸಖ ವರ ಜನಾರ್ದನವಿಟ್ಠಲರೇಯಾ l

ಧಾರ್ತರಾಷ್ಟ್ರನ ವದದು ಧೈರ್ಯಶಾಲಿಯ ಮಾಡೋ ll 3 ll

ರಾಗ - : ತಾಳ -

ರಘುರಾಮಗೆ ಬೆಳಗಿರೆ ಬೇಗ ಆರತಿ ll ಪ ll

ದಶರಥಪುತ್ರಗೆ ಪಶುಪತಿ ಮಿತ್ರಗೆ

ಋಷಿಗಳ್ಯಾಗವ ಕಾಯ್ದವಗೆ

ಶಶಿಮುಖಿ ಅಹಲ್ಯೆ ಶಾಪವ ಕಳೆದ

ಅತುಳ ಮಹಿಮ ಶ್ರೀಹರಿಗೆ ll 1 ll

ಶಿವನ ಧನುವ ಮುರಿದವನಿಜೆಯಳ ತಂದು

ಜವದಿ ಪರಶುರಾಮನಿಗೆ

ತವಕದಿ ಗರ್ವವ ಮುರಿದವನೀಶಗೆ

ಕಮಲಾಕ್ಷಿಯರೀಗ ಬೇಗ ll 2 ll

ಅನುಜನವಡಗೂಡಿ ವನಿತೆ ಸಹಿತಲೀ

ವನಕೆ ಪೊರಟು ಅಂಜನೆಯ

ತನುಜನಗೂಡಿ ದನುಜನ ಮುರಿದ

ಘನದ ಶ್ರೀ ಶ್ರೀನಿವಾಸಗೆ ll 3 ll

ರಾಗ - : ತಾಳ -

ಕಂಡೆ ಕಮಲನಾಭನ l ಕಣ್ಣಾರೆ l

ಪುಂಡರೀಕನ ಪಾಲನ l

ಪಂಢರಪುರ ವಾಸನ l

ಸಕಲ ಬೊಮ್ಮಾಂಡವ ಧರಿಸಿದನಾ ll ಪ ll

ಸುಲಭ ದೇವರ ದೇವ ನಾನಾ l ಪರಿ

ಮಳ ತುಳಸಿಗೆ ವಲಿವನ l

ಕಲಿಕಾಲ ಸಲಹುವನ l ಭವದ ಸಂ l

ಕಲೆ ಪರಿಹರಿಸುವನ ll 1 ll

ಲಿಂಗ ಸಂಗವನೀವನ l

ಜಗದಂತರಂಗ ಮೋಹನ ಕಾಯನ l

ಮಂಗಳ ದೇವೇಶನ l ಸಿರಿ ಪಾಂಡು l

ರಂಗ ನೆನೆಸಿಕೊಂಬನ ll 2 ll

ಜಗದಸ್ಮದ್ಭರಿತ ನಾನಾ l ವನದಿ

ಬಿಗಿದ ಪರಾಕ್ರಮನಾ l

ನಗವನೆತ್ತಿದ ಧೀರನಾ l ತನ್ನನು l

ಪೊಗಳಲು ಹಿಗ್ಗುವನಾ ll 3 ll

ಯಾದವ ಶಿರೋರನ್ನನ l ಕೊಳಲು

ಊದುವ ಚನ್ನಿಗನಾ l

ಆದಿ ಪರಮ ಪೂಂಸನ ಸರ್ವ l

ವೇದ ನಿಕರಮಯನಾ ll 4 ll

ಇಟ್ಟಿಗೆಯಲಿ ನಿಂದನ l ವರಂಗಳ

ಕೊಟ್ಟರೆ ತಪ್ಪದವನ l

ಅಟ್ಟಿ ಖಳನ ಕೊಂದನಾ l ವಿಜಯ l

ವಿಟ್ಠಲ ಜಗದೀಶನಾ ll 5 ll

ರಾಗ - : ತಾಳ -

ಬಡವರಾಧಾರಿ ಖಡು ದಯಾಸಾಗರ l

ದೃಢ ಶರಣರಾಪಾಲ ಒಡೆಯ ವೆಂಕಟರಾಯಾ ll ಪ ll

ಮಡದಿ ಮಕ್ಕಳು ಮನೆ ವಡವಿ ಧನ ಪಶುವರ್ಗ l

ಸಡಗರದಿ ನಿನ್ನ ಚರಣಕ ಅರ್ಪಿಸಿ ll

ನಡತಿವಂತರ ಸುಸಂಗಡದಿ ಲೋಲ್ಯಾಡಿ l

ಮೃಡಸಖನೆ ಮುಖ್ಯ ನಾಮಾಮೃತದ ಪಡಿ ಬಯಪ ll 1 ll

ಗುರುಪಾದ ನಿಷ್ಠಿಯಲಿ ಸರಿಯದಲೆ ಇರಳ್ಹಗಲು l

ಅರಮರಿಯ ಮಾಡದಲೆ ಧರಿಯ ಮ್ಯಾಲೆ l

ಇರತಕ್ಕಾ ಜನಕ ನಿನ್ನಿರವ ತೋರಿ ಪೊರವ l

ಪರಮ ಕರುಣಾಂಬುಧೆ ಪರಿಚಾರಿಕ ಬಂದ ll 2 ll

ಕಂದ ನಾನು ನುಡಿ ಕೇಳೋ ಕಮನೀಯ ಮೂರುತಿ l

ಮುಂದರಿಯದ ಜ್ಞಾನಿ ಮಂದಿಗಳಾರಾ l

ಹೊಂದಿಟ್ಟು ರಕ್ಷಿಸೊ ಬಿಂದುಮಾಧವ ಯನ್ನ l

ತಂದೆ ಜನಾರ್ದನವಿಟ್ಠಲ ಸಂದರುಶನಕ ಬಂದ ll 3 ll

ರಾಗ - : ತಾಳ -

ಹರಿಹರಿ ದಯವಾಗೊ ರಮಾಧವ ಶ್ರೀ l

ಹರಿ ದಯವಾಗೊ ಭವ l

ಶರಧಿಯೊಳ್ಪರಿಪರಿ ನೊಂದೆ l

ಪಾರಗೈಸೊ ಪಾರಾಶರ ಸುತನೆ ll ಪ ll

ರಾಮಕೃಷ್ಣ ವ್ಯಾಸಾ ನಿಮ್ಮ ನಾಮ ಭಜಕ ದಾಸಾ l

ಕಾಮಿತ ಫಲಲೇಶಾ ಕೊಡದೆ ಕಾಡುವಿ ಸರ್ವೇಶಾ l

ಪ್ರೇಮವೇನೊ ಸುಖಧಾಮ ನೀನೀ ಪರಿ l

ಪಾಮರಿಂದ್ಯೆನ್ನ ಪಳಿಸುವಿ ದೇವಾ ll 1 ll

ಅಲ್ಲು ನೀನೆ ಇರುವಿ ಯನ್ನಲ್ಲಿದ್ದು ಯಾಕೆ ಮರೆವಿ l

ಬಲ್ಲಿದ ನೆನಿಸುವಿ ಕ್ಷುಲ್ಲಕರಿಂದಲಿ ದಣಿಸುವಿ l

ಸಲ್ಲುವದೆ ನಿನಗಿದೆ ಉಚಿತಾದರೆ l

ಕೊಲ್ಲೊ ಬ್ಯಾಗ ಮಾವಲ್ಲಭ ಮೂರ್ತಿ ll 2 ll

ನಾನು ಯಂಬೊ ಸೊಲ್ಲಾ ತನ್ನ ಕಾಣದೆ ಬಿಡದಲ್ಲಾ l

ಮನದಾಸೆಗೆ ಮಿತಿಯಿಲ್ಲಾ ನೀನರಿಯದ ಮಾತಿದರೊಳಿಲ್ಲಾ l

ಯೇನು ಹೇಳಲೊ ಯನ್ನ ಭವಣಿಯು l

ಮೀನ ಮರಿಯಂತ ಮರಗುವೆ ನಲ್ಲೊ ll 3 ll

ಕರುಣ ಬರದೆ ನಿನಗೆ ಈ ಹರಣಕ ಸುಖ ಲೇಶವಿಲ್ಲ ಈಗ l

ಮರಣವೆ ಸುಖಯನಗೆ ಕರಿಕರಿ ಭವ ತೊಲಗಿಸು ಬ್ಯಾಗ l

ಚರಣಕ್ಕೆರಗುವೆನೊ ಸಿರಿವರ ಶ್ರೀ ಹರಿ l

ಬರದೆ ತಡಿಯದಿರು ಭಕ್ತರ ಧೊರಿಯೆ ll 4 ll

ಎಷ್ಟು ಹೇಳಲಯ್ಯಾ ಈ ಕಷ್ಟವ ನೀಬಂದು ಬಿಡಿಸೊ ಜೀಯ್ಯಾ l

ಕೃಷ್ಣವಿಟ್ಠಲರಾಯಾ ಇಷ್ಟರೊಳ್ಸಂತುಷ್ಟನಾಗಿ ಕೈಯಾ l

ಘಟ್ಯಾಗ್ಹಿಡಿದರ ಬಿಟ್ಹೋಯಿತು ಶ್ರಮ l

ಬಟ್ಟದ್ದೆಲ್ಲ ಸಾರ್ಥಕಯಿಂದಿಗೆ ll 5 ll

#Gini #Ginitha #GinithaS #Mookambika #Ambika #Shivaraj #Sheshadri #puram ##ಶ್ರೀ #ವಿಜಯದಾಸರ #ಸುಳಾದಿ: #ಸತ್ಸಭೆಗೆ #ನೇಮಿಸುವೆ #ಮಾಸ #ನಿಯಾಮಕ #ತ್ರಿವಿಕ್ರಮಾಯ #ನಮಃ #ರಾಗ #ತಾಳ

https://youtu.be/YeM46-NHxHA?si=h_ckdHibpppfNgDM

More Chapters